ದಿ.ಸೌ ಸುಜಾತ ಕುಲಕರ್ಣಿಯವರ ಮೃತ್ಯುತ್ತರ ವಿಧಿಗಳ ಹಿಂದಿನ ಅಧ್ಯಾತ್ಮಶಾಸ್ತ್ರ

110

  • ‘ಪ್ರತಿಯೊಬ್ಬರ ಆಯುಷ್ಯದಲ್ಲಿ ‘ಯಾವುದಾದರೊಬ್ಬ ಸಮೀಪದ ವ್ಯಕ್ತಿಯ ಮೃತ್ಯುವಾಗುವ ಘಟನೆಯು ಯಾವಾಗಲಾದರೊಮ್ಮೆ ಖಂಡಿತವಾಗಿಯೂ ಘಟಿಸುತ್ತದೆ. ಹಿಂದೆ ಅವಿಭಕ್ತ ಕುಟುಂಬಗಳಿರುತ್ತಿದ್ದವು. ಆದ್ದರಿಂದ ಕುಟುಂಬದವರಲ್ಲಿ ಯಾರಿಗಾದರೂ ಗಂಭೀರ ರೋಗಗಳಾದರೆ, ಅವರಿಗೆ ಕುಟುಂಬದ ಇತರ ಸದಸ್ಯರು ಸಹಾಯ ಮಾಡುತ್ತಿದ್ದರು.
  • ಕುಟುಂಬದಲ್ಲಿ ಯಾರದ್ದಾದರೂ ಮೃತ್ಯುವಾದರೆ ಕುಟುಂಬದಲ್ಲಿನ ಎಲ್ಲ ಜನರು ಒಟ್ಟಿಗೆ ಸೇರಿ ಮೃತ್ಯುನಂತರದ ವಿಧಿಗಳನ್ನು ಮಾಡುತ್ತಿದ್ದರು. ಪ್ರಸ್ತುತ ಗ್ರಂಥದಲ್ಲಿ ಉಲ್ಲೇಖಿಸಿದ ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಅಂಬರನಾಥದಲ್ಲಿನ ಕುಲಕರ್ಣಿ ಕುಟುಂಬವು (ಶ್ರೀ. ದೇವದತ್ತ ಕುಲಕರ್ಣಿ, ಅವರ ಪತ್ನಿ ಸೌ. ಸುಜಾತಾ ಕುಲಕರ್ಣಿ ಮತ್ತು ಅವರ ಮಗಳು ಕು. ತೃಪ್ತಿ)
  • ಕಳೆದ ೧೦ ವರ್ಷಗಳಿಂದ ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮದಲ್ಲಿ ಬಂದು ವಾಸ್ತವ್ಯದಲ್ಲಿದ್ದಾರೆ. ಅವರಲ್ಲಿ ಸೌ. ಸುಜಾತಾ ಕುಲಕರ್ಣಿಯವರು ವರ್ಷವಿಡೀ ಗಂಭೀರ ಅನಾರೋಗ್ಯದ ನಂತರ ೨೦.೪.೨೦೨೦ ರಂದು ಮೃತರಾದರು.
  • ಈ ಗ್ರಂಥದಲ್ಲಿ ‘ಸೌ. ಕುಲಕರ್ಣಿಯವರ ಮೃತ್ಯುವನ್ನು ಕುಲಕರ್ಣಿ ಕುಟುಂಬದವರು ಸಾಧಕರ ಸಹಾಯದಿಂದ ಹೇಗೆ ಎದುರಿಸಿದರು, ಹಾಗೆಯೇ ಕುಲಕರ್ಣಿ ಕುಟುಂಬದವರ ಸಾಧನೆ ಇರುವುದರಿಂದ ಈ ಕಾಲದಲ್ಲಿ ಅವರು ದೇವರ ಕೃಪೆಯನ್ನು ಹೇಗೆ ಅನುಭವಿಸಿದರು ಎಂಬುದನ್ನು ನೀಡಲಾಗಿದೆ.
  • . ಕುಲಕರ್ಣಿಯವರ ಮೃತ್ಯುನಂತರ, ಹಾಗೆಯೇ ಮೃತ್ಯುನಂತರದ ವಿಧಿಗಳ ಸಮಯದಲ್ಲಿ ಮಾಡಿದ ಸೂಕ್ಷ್ಮದಲ್ಲಿನ ಪರೀಕ್ಷಣೆಗಳನ್ನೂ ಗ್ರಂಥದಲ್ಲಿ ನೀಡಲಾಗಿದೆ. ಇದನ್ನು ಓದಿ ಮೃತ್ಯುನಂತರದ ಸೂಕ್ಷ್ಮದಲ್ಲಿನ ಪ್ರಕ್ರಿಯೆ ಹೇಗಿರುತ್ತದೆ ಎಂಬುದು ಗಮನಕ್ಕೆ ಬರುವುದು.
  • ಸೌ. ಕುಲಕರ್ಣಿಯವರ ಸಾಧನೆ ಇರುವುದರಿಂದ ಅವರ ಮೃತ್ಯುನಂತರದ ಪ್ರವಾಸವು ಸುಖಕರವಾಯಿತು ಎಂಬುದು ಸೂಕ್ಷ್ಮಪರೀಕ್ಷಣೆಯಲ್ಲಿನ ವಿವೇಚನೆಯಿಂದ ತಿಳಿಯುತ್ತದೆ
Index and/or Sample Pages

Contact : [email protected]
Mobile : +91 9342599299